Friday, August 25, 2017

ದ್ವಾರಕ, ಗುಜರಾತ್

ನಮ್ಮ  ಭಾರತ ದೇಶದ ಪಶ್ಚಿಮದಲ್ಲಿರುವ ಗುಜರಾತ್ ರಾಜ್ಯದ ಅರಬ್ಬೀ ಸಮುದ್ರ ತೀರದಿ ಇರುವ ನಗರ ದ್ವಾರಕ. ವಿಷ್ಣು ಸ್ವರೂಪನಾದ ಕೃಷ್ಣನು ಮಥುರದಲ್ಲಿ ಹುಟ್ಟಿ ಇಲ್ಲಿ ರಾಜ್ಯಭಾರ ಮಾಡಿದನೆಂದು ಭಾಗವತ ಹೇಳುತ್ತದೆ.  ಹಾಗಾಗಿ ಈ ದ್ವಾರಕ ನಗರವನ್ನು ದೇವಭೂಮಿ ದ್ವಾರಕಯೆಂದು ಸಹ ಕರೆಯುತ್ತಾರೆ. ನಮ್ಮ ಕೃಷ್ಣನು ಇಲ್ಲಿ ದ್ವಾರಕಾಧೀಶ ಎಂಬ ಹೆಸರಿನಲ್ಲಿ ಅವತರಿಸಿರುವ ಕಾರಣದಿಂದ ಈ ದ್ವಾರಕ ನಗರ ಸಪ್ತ ಮಹಾ ಧಾರ್ಮಿಕ ಸ್ಥಳಗಳಲ್ಲಿ ಒಂದು. ದ್ವಾರಕನಾಗರವು ಅರಬ್ಬೀ ಸಮುದ್ರದಲ್ಲಿ ಮುಳುಗಿತ್ತು. ಇದು ದ್ವಾಪರಯುಗದ ಅಂತ್ಯ ಎಂದು ಹೇಳಲಾಯಿತು.

ಇದರ ಸಲುವಾಗಿ, ನಮ್ಮ ಪ್ರಿಯ ದೇವನಾದ ಕೃಷ್ಣ  ರಾಜವೈಭವನ್ನು ಪ್ರತಿಬಿಂಬಿಸುವ ಈ ನಗರದಲ್ಲಿ, ಕೃಷ್ಣನ ಅವತಾರವಾದ ದ್ವಾರಕಾಧೀಶ ದೇವಸ್ಥಾನವನ್ನು ಆದಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದರು. ಶಂಕರಾಚಾರ್ಯರು ದೇಶದೆಲ್ಲೆಡೆ ಹಿಂದು ಧರ್ಮ ಪ್ರಚಾರ ಮಾಡುವ ನಿಟ್ಟಿನಲ್ಲಿ ದೇಶದ ನಾಲ್ಕು ಮೂಲೆಗಳಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದರು.  ಆ ನಾಲ್ಕು ಮಠಗಳ ಸ್ಥಾಪನೆಯಲ್ಲಿ ಒಂದು ಈ ದ್ವಾರಕ ಮಠ (ಅಥವಾ ಶಂಕರ ಮಠ). ಶಂಕರಾಚಾರ್ಯರು ಸ್ಥಾಪಿಸಿದ ಈ ಮಠವನ್ನು ಮೊಹಮದಿ ಸುಲ್ತಾನ ಕೆಡವಿದ್ದನ್ನು. ಅದನ್ನು ನಂತರ ಬ್ರಿಟೀಷರ ಕಾಲದ ಗೈಕ್ವಾಡನ ಮಹಾರಾಜ ಖಾಂಡೇರಾವ್ ಸರಿಪಡಿಸಿದನು. ನಂತರ ಸಯಾಜಿರಾವ್ ಎಂಬ ಅರಸನು ನವೀಕರಣ ಮಾಡಿದನೆಂದು ಇತಿಹಾಸದಲ್ಲಿ ಹೇಳಲಾಗಿದೆ.  
ಈ ದೇವಸ್ಥಾನದ ಅನೇಕ ವಿಶೇಷಗಳನ್ನು ಹೊಂದಿದೆ. ಅದರಲ್ಲಿ ಒಂದೇನೆಂದರೆ, ಈ ಏಳು ಸುತ್ತಿನ ಮಹಡಿಯ ಮಂದಿರದ ಶಿಖರದಲ್ಲಿ ಹಾರುತ್ತಿರುವ ಧ್ವಜ. ಈ ಧ್ವಜವನ್ನು ನೀವು ಸುಮಾರು ಹತ್ತು ಮೈಲಿ ದೂರದಿಂದ ನೋಡಬಹುದು. ಹಾಗಾಗಿ ಈ ದೇವಸ್ಥಾನದ ವಿಶೇಷ ಪೂಜೆಗಳಲ್ಲಿ ಈ ಧ್ವಜ ಪೂಜೆ ಒಂದು. ಈ ಪೂಜೆಗೆ ನೋಂದಣಿ ಮಾಡಿದ ಭಕ್ತರ ಗೋತ್ರ , ನಕ್ಷತ್ರ , ಹೆಸರಿನಿಂದ ಪೂಜೆ ಸಲ್ಲಿಸಿ ನಂತರ ಮಂದಿರದ ಶಿಖರದಲ್ಲಿ ಹರಿಸಲ್ಪಡುತ್ತದ್ದೆ. 
ಇಲ್ಲಿನ ಇನ್ನೊಂದು ವಿಶೇಷವೇನೆಂದರೆ, ಈ ದೇವಸ್ಥಾನವು ಗೋಮತಿ ನದಿದಡದಲ್ಲಿ ಇರುವುದು. ದೇವಸ್ಥಾನದ ಇನ್ನೊಂದು ದ್ವಾರ ಈ ಗೋಮತಿ ನದಿಯ ತೀರದಿ ಇರುವುದು. ಭಕ್ತರು ಈ ನದಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವಸ್ಥಾನಕ್ಕೆ ಇರುವ ೫೬ ಮೆಟ್ಟಿಲುಗಳನ್ನು ಹತ್ತಿ ಪರಮಾತ್ಮನ ದರ್ಶನಕ್ಕೆ ಹೋಗುವ ಪ್ರತೀತಿ ಇದೆ. 
ಈ ಧ್ವಾರಕಾಧೀಶ ದೇವಸ್ಥಾನದ ಸುತ್ತುಮುತ್ತಲಿನಲ್ಲಿ ಅನೇಕ ದೇವಾಲಯಗಳು ಇವೆ. ಕೃಷ್ಣನನ್ನು ಆಡಿಸಿದ ಯಶೋದಾದೇವಿ, ಕೃಷ್ಣನ ಮಡದಿಯರಾದ ರಾಧಾ, ಸತ್ಯಭಮರ ದೇವಲಾಯಗಳಿವೆ. ಅಷ್ಟೇ ಅಲ್ಲದೆ ಕೃಷ್ಣನ ಮಗನಾದ ಪ್ರದ್ಯುಮ್ನ ಹಾಗು ಮೊಮ್ಮಗನಾದ ಅನಿರುದ್ಧನನ್ನು ಸಹ ದರ್ಶನ ಮಾಡಬಹುದು.
ಇಲ್ಲಿನ ಇನ್ನೊಂದು ವಿಶೇಷ, ಇಲ್ಲಿ ಕೃಷ್ಣನ ಪ್ರಿಯವಾದ ರುಕ್ಮಿಣಿಯ ದೇಗುಲವಿಲ್ಲ. ಇದರೆ ಹಿಂದೆ ಬಹುಮುಖ್ಯ ಕಾರಣಕರ್ತರು  ಧುರ್ವಾಸಮುನಿಗಳು. 
ಇದರ ಕಥೆ ಹೀಗಿದೆ:
ನಮ್ಮ ವೇದಗಳಲ್ಲಿ ಬ್ರಾಹ್ಮಣರಿಗೆ ಅಡಿಗೆ ಮಾಡಿ ಊಟ ಹಾಕುವುದು ಅತ್ಯಂತ ಶ್ರೇಷ್ಠಕರವಾದ್ದದ್ದು.  ಹಾಗಾಗಿ  ಒಂದು  ದಿನ  ಕೃಷ್ಣ  ರುಕ್ಮಿಣಿಯು  ತಮ್ಮ  ಕುಲಗುರುಗಳಾದ  ಧೂರ್ವಸಮುನಿಯವರ  ಬಳಿ  ಬಂಧು  , ತಮ್ಮ  ಮನೆಯಲ್ಲಿ  ವಿಶೇಷ  ಭೋಜನಕ್ಕೆ  ಮುನಿಗಳನ್ನು  ಆಹ್ವಾನಿಸುತ್ತಾರೆ . ಆಗ  ದುರ್ವಾಸಮುನಿಗಳು  ಕೃಷ್ಣ  ಮತ್ತು  ರುಕ್ಮಿಣಿಯವರೇ  ಕರೆದೊಯ್ಯಬೇಕೆಂದು  ಹೇಳುತ್ತಾರೆ. ಇದರ  ಪ್ರಯುಕ್ತ  ಕೃಷ್ಣ  ಮತ್ತು  ರುಕ್ಮಿಣಿಯೇ  ಮುನಿಗಳನ್ನು  ಕರೆದೊಯ್ಯುತಾರೆ. ಹೋಗುವ  ದಾರಿಯಲ್ಲಿ  ರುಕ್ಮಿಣಿಯವರಿಗೆ  ತಾಳರಲದಷ್ಟು  ದಾಹವಾಗುತ್ತದೆ.  ಆಗ  ಕೃಷ್ಣನು  ಗಂಗೆ  ಯಮುನೆಯನ್ನು  ಚಿಮುಕಿಸ್ಸಿ  ರುಕ್ಮಿಣಿಗೆ  ದಾಹವನ್ನು  ತೀರಿಸುತ್ತಾನೆ . ಆಗ ಧೂರ್ವಸಮುನಿಯವರು  ಕೋಪಗೊಳ್ಳುತಾರೆ .  ಏಕೆಂದರೆ , ನಮ್ಮ  ಧರ್ಮದಲ್ಲಿ  ಮೊದಲು  ಬ್ರಾಹ್ಮಣರಿಗೆ  ನೀಡಿ  ನಂತರ  ಸೇವಿಸಬೇಕು  ಎನ್ನುವ  ನಿಮಯ  ಉಂಟು .  ಕೃಷ್ಣ  ರುಕ್ಮಿಣಿಯು ಧರ್ಮ ವಿರೋಧಿಸಿದನು  ಎಂದು  ಕೋಪಗೊಂಡ  ಧೂರ್ವಸಮುನಿಯವರು  ಕೃಷ್ಣ  ರುಕ್ಮಿಣಿಯರಿಗೆ  ಶಾಪವನ್ನು  ನೀಡುತ್ತಾರೆ. ಶಾಪವೇನೆಂದರೆ  , ರುಕ್ಮಿಣಿಯು  ೨೫ ವರ್ಷಗಳ  ಕಾಲ  ವನವಾಸ  ಹೋಗಬೇಕು  ಎಂದು  ಹಾಗು  ಕೃಷ್ಣನಿಗೆ  ಅವನ  ರಾಜ್ಯವಾದ  ದ್ವಾರಕವು  ನೀರಿಲ್ಲದ  ಭೂಮಿ  ಅಗಲಿಯೆಂದು .
ಇದರ  ಸಲುವಾಗಿ  ದ್ವಾರಕಾನಗರದಲ್ಲಿ  ಕುಡಿಯೋದಕ್ಕೆ  ತಕ್ಕಂಥ  ನೀರು  ಈಗಲೂ  ಇಲ್ಲ .
ಹಾಗು  ದ್ವಾರಕದಲ್ಲಿ  ರುಕ್ಮಿಣಿಯ  ದೇವಸ್ಥಾನವಿಲ್ಲ . ರುಕ್ಮಿಣಿಯ  ದೇವಾಲಯವನ್ನು  ನೀವು  ಹತ್ತಿರದ  ದ್ವೀಪ  ಬೆಯ್ಟ್  ದ್ವಾರಕದಲ್ಲಿ  ನೋಡಬಹುದು . 
ದ್ವಾರಕಾನಗರ  ಜನರಿಗೆ  ನೀರು  ಇಲ್ಲದ  ಪರಿಸ್ಥಿತಿ  ಇದ್ದುದರಿಂದ , ಕೃಷ್ಣನು  ಸಮುದ್ರ  ರಾಜನ  ಮಗಳಾದ  ಗೋಮತಿ  ಯನ್ನು  ನದಿ  ರೂಪದಲ್ಲಿ  ಮಾಡುವೆ  ಆಗುತ್ತಾನೆ . ಆದರೆ  ಇಲ್ಲಿನ  ನೀರು  ಕುಡಿಯಲು  ಯೋಗ್ಯವಲ್ಲ . ಹಾಗಾಗಿ  ದ್ವಾರಕಕ್ಕೆ  ಕುಡಿಯುವ  ನೀರು  ಸುಮಾರು  ೧೦  ಕಿಲೋಮೀಟರು  ದೂರದ  ಊರಿನಿಂದ  ಬರುತ್ತದೆ .
ನಾನು  ಶಾಲೆಯಲ್ಲಿ  ಇದ್ದಾಗ  ಕಲಿತಿದ್ಧು , ನದಿ  ಹರಿದು  ಸಮುದ್ರವನ್ನು  ಸೇರುತ್ತದೆ  ಎಂದು . ಅದನ್ನು  ನಾನು  ಇಲ್ಲಿ  ಪ್ರತ್ಯಕ್ಷವಾಗಿ  ಕಂಡೆನು . ಗೋಮತಿ  ನದಿ  ಸಮುದ್ರವನ್ನು  ಸೇರುವುದನ್ನು  ನೀವು  ಈ  ದೇವಸ್ಥಾನದ  ಬಳಿ  ಗೊಂತಿ  ಘಾಟ್  ನಲ್ಲಿ  ಕಾಣಬಹುದು . ಇಲ್ಲಿನ  ಸೂರ್ಯಾಸ್ತವು  ಒಂದು  ಸುಂದರ ಕ್ಷಣ  .
ಇನ್ನೊಂದು  ವಿಶೇಷವೇನೆಂದರೆ  ಇಲ್ಲಿ  ಬ್ರಾಹ್ಮಣರಿಗೆ  ಅವಲಕ್ಕಿಸೇವೆ  ನೀಡುವುದು . ಇದು  ಕೃಷ್ಣ -ಸುದಾಮರ  ಸ್ನೇಹದ  ಪ್ರತಿ. ಸುಧಾಮನು  ಕೃಷ್ಣನನ್ನು  ನೋಡಲು  ಬಂದಾಗ  ಒಳಗಡೆ  ಪ್ರವೇಶಿಸುವ  ಮೊದಲು, ದ್ವಾರದ  ಹೊರಗಡೆಯೇ  ಸ್ವಲ್ಪ  ಹೊತ್ತು ಕುಳಿತು  ವಿಶ್ರಾಂತಿಸುತ್ತಾನೆ. ಅದರ  ಹಿನ್ನಲೆಯಲ್ಲಿ,  ಈ  ದೇವಸ್ಥಾನದ  ಹೊರಗಡೆ, ಮೆಟ್ಟಿಲುಗಳ  ಬಳಿ  ಒಂದು  ಪ್ರಾಂಗಣವಿದೆ. ಅಲ್ಲಿ  ಭಕ್ತರು  ಕುಳಿತು  ವಿಶ್ರಾಂತಿಸುವುದು  ಬಹು  ಆಹ್ಲಾದಕರವಾದದ್ದು . ಇದೆ  ಪ್ರಾಂಗಣದಲ್ಲಿ  ತುಲಾಭಾರ  ಸೇವೆ  ನಡಿಯುತ್ತದೆ.
ಈ  ಕೊಠಡಿಯ  ಎದುರು  ಒಂದು  ಚಿಕ್ಕದಾದ  ದೇವರ ಗೂಡು  ಉಂಟು . ಈ  ದೇವರು  ನೀವು  ಬಂದಿದ್ದೀರೆಂದು  ಹಾಜರಾತಿ  ನೀಡುವನೆಂದು  ಹೇಳುವರು.
ಈಗ  ನಿಮ್ಮ  ಹಾಜರಾತಿ  ಕೊಡುವ  ಸಮಯ. ದಯಮಾಡಿ ನಿಮ್ಮ  ಅನಿಸಿಕೆ  ಅಭಿಪ್ರಾಯವನ್ನು  ನೀಡಿ . ಇಷ್ಟವಾದಲ್ಲಿ  ಎಲ್ಲರಿಗೂ  ಓದಲು  ತಿಳಿಸಿ . ನಿಮ್ಮ  ಸಮಯಕ್ಕೆ  ಹಾಗು  ಪ್ರೋತ್ಸಾಹಕ್ಕೆ  ನನ್ನ  ಕಡೆ  ಇಂದ  ಬಹಳ  ಧನ್ಯವಾದ .
-       ಸಹನ