Tuesday, August 27, 2013

ನಿಜವಾದ ಸುಖ

 



ನಾವೆಲ್ಲರೂ ಕೃಷ್ಣನಲಿ ಭಕ್ತಿ ತೋರಿದಾಗ ಅವನನ್ನು ಪೋಷಿಸುತ್ತೇವೆ . ಅಂತವರನ್ನು ಕೃಷ್ಣ ರಕ್ಷಿಸುತ್ತಾನೆ . ಭಗವದ್ಗೀತೆಯಲ್ಲಿ  ಹೇಳಿರುವಂತೆ ,ಪ್ರತಿ ಜೀವಿಗೂ ಕೃಷ್ಣನು ನಿಜವಾದ ಗೆಳೆಯ . ಈ ಗೆಳೆತನದ ಪುರರ್ಚೆತನಕ್ಕೆ ಕೃಷ್ಣ ಪ್ರಜ್ಞೆಯು ಒಂದು ದಾರಿ .

 ಕೃಷ್ಣ ಪ್ರಜ್ಞೆಯ ಹಾದಿಯಲ್ಲಿ ಮುನ್ನಡೆದಾಗ ಆಧ್ಯಾತ್ಮಿಕ ಸುಖವನ್ನು ಸವಿಯಬಹುದು. ನಿಜವಾದ ಸುಖದ ನೆಲೆಯು ಕ್ಷಣಿಕ ವಸ್ತುಗಳನ್ನು ಮೀರಿದ್ದು ಎನ್ನುವುದು ಬಹು ಜನ ಅರಿಯರು. ಇಂತಹ ನಿಜವಾದ ಸುಖವನ್ನು ನಮ್ಮ ಪ್ರಿಯ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ವರ್ಣಿಸಿ ಹೇಳಿದ್ದಾನೆ .  

 ಆಧ್ಯಾತ್ಮಿಕ ಕಿಡಿಯು ನಿರಾಕಾರವಲ್ಲ . ಅದು ವಾಸ್ತವವಾಗಿಯೂ ಒಬ್ಬ ವ್ಯಕ್ತಿ . ಆಧ್ಯಾತ್ಮಿಕ ಕಿಡಿಯಿಲ್ಲದೆ ದೇಹವು ಸುಖದ ಭಾವವನ್ನು ಅನುಭವಿಸಲಾರದು . ದೇಹವು ಸುಖಿಸುವುದು ಆತ್ಮದಿಂದಲಿ . ಯಾವ ವ್ಯಕ್ತಿಯ ಆತ್ಮ ಅನಿಯಮಿತ   ದಿವ್ಯ ಸುಖವನು ಅನುಭವಿಸುತ್ತಾನೋ  ಅಂತವನು ಸತ್ಯದ ಮಾರ್ಗ ಬಿಟ್ಟು ಅತ್ತಿತ್ತ ಚಲಿಸುವುದಿಲ್ಲ . ಇಂತಹ ಆಧ್ಯಾತ್ಮ ಸುಖವನ್ನು ಪ್ರತಿಯೊಬ್ಬನು ಸವಿಯಬೇಕು. 

  
ಹಾಗೆಯೇ ಕೃಷ್ಣ ಪ್ರಜ್ಞೆಯ ಸ್ಥಾನದಲ್ಲಿ ಸ್ಥಿರನಾದಾಗ ವ್ಯಕ್ತಿಯು ಎಂತಹ ಆಪತ್ತಿನ ನಡುವೆಯೂ ವಿಚಲಿತನಾಗುವುದಿಲ್ಲ. ಕೃಷ್ಣ ಪ್ರಜ್ಞೆಯಲ್ಲಿ ಇರಲು ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು . ಅದಕ್ಕಾಗಿ ಯೋಗ ಪ್ರಕ್ರಿಯೆ ಉಂಟು . ಹಾಗೆಯೇ ನಮ್ಮ ಮನಸ್ಸು ಯಾವಾಗ ಕೃಷ್ಣ ಮಂತ್ರವನ್ನು ಜಪಿಸ್ಸುವಲ್ಲಿ ತೊಡಗುತ್ತದೋ , ಆಗ ಮನಸ್ಸು ನಮ್ಮ ಹತೋಟಿಗೆ ಬರುತ್ತದೆ . 

ಭಗವದ್ಗೀತೆ ೬.೨೭ ರಲ್ಲಿ  ಕೃಷ್ಣನು ಯಾವ ಯೋಗಿಯು ನನ್ನಲ್ಲಿ ಮನಸನ್ನು ನೆಲೆಗೊಳಿಸುತ್ತಾನೋ ಅಂತಹವನು ಅತ್ಯುನ್ನತ ಮಟ್ಟದ ಸುಖವನು ಗಳಿಸುತ್ತಾನೆ, ಅವನು ತನ್ನ ಮನಸ್ಸನ್ನು ಬ್ರಹ್ಮನ್ನೊಂದಿಗೆ ಸಮೇಕರಿಸಿಕೊಂಡದ್ದರ ಫಲವಾಗಿ ಅವನು ಮುಕ್ತ ,ಶಾಂತ ಮನಸ್ಕ ಮತ್ತು  ಅವನ ರಜೋಗುಣಗಳು ತಣ್ಣಗಾಗುತ್ತವೆ ಹಾಗು ಅವನು ಪಾಪ ಮುಕ್ತನಾಗುತ್ತನೆಂದು ಹೇಳಿದ್ದಾನೆ . 
ಅದಕ್ಕಾಗಿ ನಾವೆಲ್ಲರೂ ಕೃಷ್ಣನ ಸ್ತುತಿಸುತ್ತ ಅವನ ಗೆಳೆತನವನ್ನು ಆರದಿಸುತ್ತಾ ನಿಜವಾದ ಸುಖವನ್ನು ಅನುಭವಿಸೋಣ . 

।। ಶ್ರೀ ಕೃಷ್ಣಾರ್ಪಣ ಮಸ್ತು ।।

-ಸಹನ 

Thursday, August 22, 2013

ಮಧ್ವನಾಮ 
========== 

ಮಧ್ವನಾಮ ಹೆಸರಾಂತ ಶ್ರೀಪಾದರಾಜರ ರಚನೆ . ಈ ಸ್ತುತಿಯು ಕನ್ನಡದಲ್ಲಿದ್ದು , ವಾಯು ದೇವರು ಹಾಗು ಅವರ ಮೂರು ಅವತಾರ ಹನುಮ-ಮದ್ವ-ಭೀಮ ರನ್ನು ಕೊಂಡಾಡಲಾಗಿದೆ. 




ಜಯ ಜಯ ಜಗತ್ರಾಣ, ಜಗದೊಳಗೆ ಸುತ್ರಾಣ
ಅಖಿಲ ಗುಣ ಸಧ್ಧಾಮ  ಮಧ್ವನಾಮ ... 



ಆವಾ ಕಚ್ಛಪರೂಪದಿಂದ  ಲಂಡೋದಕವ
ಓವಿ  ಧರಿಸಿದ  ಶೇಷಮೂರುತಿಯನು
ಆವವನ  ಬಳಿವಿಡಿದು  ಹರಿಯ  ಸುರರೈದುವರೋ
ಆ  ವಾಯು  ನಮ್ಮ  ಕುಲ  ಗುರುರಾಯನು|| ೧  ||

 
ಅವವನು  ದೇಹದೊಳಗಿರಲು  ಹರಿ  ನೆಲೆಸಿಹನು 
ಅವವನು  ತೊಲಗೆ  ಹರಿ  ತಾ ತೊಲಗುವ
ಅವವನು  ದೇಹದ  ಒಳ ಹೊರಗೆ   ನಿಯಾಮಕನು 
ಆ  ವಾಯು  ನಮ್ಮ  ಕುಲ  ಗುರು ರಾಯನು   || ೨ ||


ಕರಣಾಭಿಮಾನಿ  ಸುರರು   ದೇಹವ  ಬಿಡಲು
ಕುರುಡ  ಕಿವುಡ  ಮೂಕನೆನ್ದೆನಿಸುವ
ಪರಮ  ಮುಖ್ಯಪ್ರಾಣ  ತೊಲಗಲಾ  ದೇಹವನು
ಅರಿತು  ಪೆಣನೆಂದು  ಪೇಳ್ವರು  ಬುಧಜನ  ||  ೩ ||


ಸುರರೊಳಗೆ  ನರರೊಳಗೆ  ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ   (ನಿಯಮಿಸಿ) ನೆಲೆಸಿಹ
ಹರಿಯನಲ್ಲದೆ  ಬಗೆಯ ಅನ್ನ್ಯರನು    ಲೋಕದೊಳು
ಗುರುಕುಳತಿಲಕ  ಮುಖ್ಯ  ಪವಮಾನನು ||೪ ||



ಹನುಮಂತ  ಅವತಾರ
=================
ತ್ರೇತೆಯಲಿ  ರಘುಪತಿಯ  ಸೇವೆ   ಮಾಡುವೆನೆಂದು
ವಾತಸುತ  ಹನುಮಂತನೆನ್ದೆನಿಸಿದ
ಪೋತಭಾವದಿ  ತರಣಿಬಿಮ್ಬಕೆ   ಲಂಘಿಸಿದ
ಈತಗೆಣೆ  ಯಾರು  ಮೂರ್ಲೋಕದೊಳಗೆ  || ೫  ||  


ತರಣಿಗಭಿಮುಖವಾಗಿ  ಶಬ್ದಶಾಸ್ತ್ರವ  ಪಠಿಸಿ
ಉರವಣಿಸಿ  ಹಿನ್ದುಮುನ್ದಾಗಿ  ನಡೆದ
ಪರಮ  ಪವಮಾನ ಸುತ   ಉದಯಾಸ್ತ  ಶೈಲಗಳಾ
ಭಾರದಿ  ಐದಿದ  ಏತಗುಪಮೆಯುಂಟೇ  || ೬ ||


ಅಖಿಲ  ವೇದಗಳ  ಸಾರವ   ಪಠಿಸಿದನು  ಮುನ್ನಲ್ಲಿ
ನಿಖಿಲ  ವ್ಯಾಕರಣಗಳ  ಇವ  ಪೇಳಿದ
ಮುಖದಲ್ಲಿ  ಕಿಂಚಿದಪಶಬ್ದ  ಇವಗಿಲ್ಲೇನ್ದು
ಮುಖ್ಯಪ್ರಾಣನನು  ರಾಮನನುಕರಿಸಿದ  || ೭ ||


ತರಣಿಸುತನನು  ಕಾಯ್ದ  ಶರಧಿಯನು  ನೆರೆದಾಟಿ
ಧರಣಿಸುತೆಯಳ  ಕಂಡು  ದನುಜರೊಡನೆ
ಭರದಿ  ರಣವನೆಮಾಡಿ  ಗೆಲಿದು  ದಿವ್ಯಾಸ್ತ್ರಗಳ
ಉರುಹಿ  ಲಂಕೆಯ  ಬಂದ   ಹನುಮಂತನು  || ೮ ||


ಹರಿಗೆ  ಚೂಡಾಮಣಿಯನಿತ್ತು  ಹರಿಗಳ  ಕೂಡಿ
ಶರಧಿಯನು  ಕಟ್ಟಿ   ಬಹು  ರಕ್ಕಸರನು
ಒರಿಸಿ  ರಣದಲಿ  ದಶಶಿರಣ  ಹುಡಿಗುಟ್ಟಿ  ತಾ
ಮೆರೆದ  ಹನುಮಂತ  ಬಲವಂತ  ಧೀರ  || ೯ ||


ಉರಗಬನ್ಧಕೆ  ಸಿಲುಕಿ  ಕಪಿವರರು  ಮೈ  ಮರೆಯೆ
ತರಣಿಕುಲತಿಲಕನಾಗ್ನೆಯನೆ  ತಾಳಿದ
ಗಿರಿಸಹಿತ  ಸಂಜೀವನವ  ಕಿತ್ತು  ತಂದಿಟ್ಟ
ಹರಿವರಗೆ  ಸರಿಯುಂಟೆ  ಹನುಮಂತಗೆ  || ೧೦  ||


ವಿಜಯ  ರಘುಪತಿ  ಮೆಚ್ಚಿ  ಧರಣಿಸುತೆಯಳಿಗೀಯೆ
ಭಜಿಸಿ  ಮೌಕ್ತಿಕದ  ಹಾರವನು  ಪಡೆದ
ಅಜಪದವಿಯನು  ರಾಮ  ಕೊಡುವೆನೆನೆ  ಹನುಮಂತ
ನಿಜಭಾಕುತಿಯನೆ  ಬೇಡಿ  ವರವ  ಪಡೆದ  || ೧೧ ||



ಭೀಮ  ಅವತಾರ
=================


ಆ  ಮಾರುತನೆ  ಭೀಮನೆನಿಸಿ  ದ್ವಾಪರದಿ
ಸೋಮಕುಲದಲ್ಲಿ  ಜನಿಸಿ  ಪಾರ್ಥರೊಡನೆ
ಭೀಮವಿಕ್ರಮ  ರಕ್ಕಸರ  ಮುರಿದೊಟ್ಟಿದ
ಆ  ಮಹಿಮಾ  ನಮ್ಮ  ಕುಲ ಗುರುರಾಯನು   || ೧೨ ||


ಕರದಿಂದ   ಶಿಶುಭಾವನಾದ  ಭೀಮನ  ಬಿಡಲು
ಗಿರಿಯೊಡೆದು  ಶತಶ್ರುನ್ಗವೆನ್ದೆನೆಸಿತು
ಹರಿಗಳ  ಹರಿಗಳಿಮ್  ಕರಿಗಳ  ಕರಿಗಳಿಮ್
ಅರೆವ  ವೀರನಿಗೆ  ಸುರಾ  ನರರು  ಸರಿಯೇ  || ೧೩ ||


ಕುರುಪ  ಗರಳವನಿಕ್ಕೆ  ನೆರೆಯುಂಡು  ತೇಗಿ
ಉರಗಗಳ  ಮೇಲ್ಬಿಡಲು  ಅದನೋರಸಿದ
ಅರಗಿನ  ಮನೆಯಲ್ಲಿ  ಉರಿಯನಿಕ್ಕಳು  ಧೀರ
ಧರಿಸಿ  ಜಾಹ್ನವೀಗೊಯ್ದ  ತನ್ನನುಜರ  || ೧೪ ||


ಅಲ್ಲಿದ್ದ  ಬಕ  ಹಿಡಿಮ್ಬಕರೆಂಬ   ರಕ್ಕಸರ
ನಿಲ್ಲದೊರಿಸಿದ  ಲೋಕಕಂಟಕರನು
ಬಲ್ಲಿದಸುರರ  ಗೆಲಿದು  ದ್ರೌಪದಿ  ಕರವಿಡಿದು
ಎಲ್ಲ  ಸುಜನರಿಗೆ  ಹರುಷವ  ಬೀರಿದ  || ೧೫  ||


ರಾಜಕುಲ  ವಜ್ರನೆನಿಸಿದ  ಮಾಗಧನ  ಸೀಳಿ
ರಾಜಸೂಯಯಾಗವನು  ಮಾಡಿಸಿದನು
ಆಜಿಯೊಳು  ಕೌರವರ  ಬಲವಾ  ಸವರುವೆನೆಂದು
ಮೂಜಗವರಿಯೆ  ಕಂಕಣಕಟ್ಟಿದ  || ೧೬ ॥

 
ದಾನವರ  ಸವರಬೇಕೆನ್ದು  ಬ್ಯಾಗ (ಬೇಗ )
ಮಾನನಿಧಿ  ದ್ರೌಪದಿಯ  ಮನದಿಂಗಿತವನರಿತು
ಕಾನನವ  ಪೊಕ್ಕು  ಕಿಮ್ಮೀರಾದಿಗಳ  ಮುರಿದು 
ಮಾನಿನಿಗೆ  ಸೌಗಂಧಿಕವನೆ   ತಂದ  || ೧೭ ॥


ದುರುಳ  ಕೀಚಕನು  ದ್ರೌಪದಿಯ  ಚೆಳುವಿಕೆಗೆ
ಮರುಳಾಗಿ  ಕರಕರಿಯ  ಮಾಡಲವನಾ
ಗರಡಿಮನೆಯೊಳು  ಬರಸಿ  ಒರಿಸಿ   ಅವನನ್ವಯವ
ಕುರುಪನಟ್ಟಿದ  ಮಲ್ಲಕುಲವ  ಸವರಿದ  || ೧೮ ॥


ಕೌರವರ  ಬಲ  ಸವರಿ  ವೈರಿಗಳ  ನೆಗ್ಗೊತ್ತಿ
ಓರಂತೆ   ಕೌರವನ  ಮುರಿದು  ಮೆರೆದ
ವೈರಿ  ದುಶ್ಯಾಸನನ  ರಣದಲಿ  ಎಡೆಗೆಡೆಹಿ(ತೊಡೆಯ ಲಡ್ಡಗೆಡಹಿ)
ವೀರನರಹರಿಯ  ಲೀಲೆಯ  ತೋರಿದ  || ೧೯॥


ಗುರುಸುತನು  ಸಂಗರದಿ  ನಾರಾಯಣಾಸ್ತ್ರವನು
ಉರವಣಿಸಿ  ಬಿಡಲು  ಶಸ್ತ್ರವ   ಬಿಸುಟರು
ಹರಿಕೃಉಪೆಯ  ಪಡೆದಿರ್ದ  ಭೀಮ  ಹುಂಕಾರದಲಿ
ಹರಿಯ  ದಿವ್ಯಾಸ್ತ್ರವನು  ನೆರೆ  ಅಟ್ಟಿದ  || ೨೦ ॥ 


ಚಂಡವಿಕ್ರಮ  ಗದೆಗೊಂಡು  ರಣದೊಳಗೆ  ಭೂ
ಮಂಡಲದೊಳಿದಿರಾದನ್ತ  ಖಳರನೆಲ್ಲ
ಹಿಂಡಿ  ಬಿಸುಟಿದ  ವ್ರುಕೋದರನ  ಅತಾಪವನು
ಕಂಡು  ನಿಲ್ಲುವರಾರು  ತ್ರಿಭುವನದೊಳು || ೨೧॥


ನಾರಿರೋದನ  ಕೇಳಿ  ಮನಮರುಗಿ  ಗುರುಸುತನ
ಹಾರ್ಹಿಡಿದು  ಶಿರೋರತ್ನ  ಕಿಟ್ಟಿ  ತೆಗೆದ
ನೀರೊಳಡಗಿದ್ದ  ದುರ್ಯೋಧನನ  ಹೊರಗೆಡಹಿ
ಉರುಯುಗ  ತನ್ನ  ಗದೆಯಿಂದ  ಮುರಿದ  || ೨೨ ||



ಮಧ್ವ  ಅವತಾರ 
 =================

ದಾನವರು  ಕಲಿಯುಗದೊಳವತರಿಸಿ  ವಿಭುದರೊಳು
ವೇನನ  ಮತವನರುಹಳದನರಿತು
ಗ್ಯಾನಿ  ತಾ  ಪವಮಾನ  ಭೂತಳದೊಳವತರಿಸಿ
ಮಾನನಿಧಿ  ಮಧ್ವಾಖ್ಯನೆನ್ದೆನಿಸಿದ  || ೨೩ ॥


ಅರ್ಭಕತನದೊಳೈದಿ  ಬದರಿಯಲಿ  ಮಧ್ವಮುನಿ
ನಿರ್ಭಯದಿ  ಸಕಲ  ಶಾಸ್ತ್ರಗಳ  ಪಠಿಸಿದ
ಉರ್ವಿಯೊಳು  ಮಾಯೆ  ಬೀರಲು  ತತ್ವಮಾರ್ಗವನು
(ಉರ್ವಿಯೊಳು  ಆಮ್ನಾಯ  ತತ್ವದ  ಮಾರ್ಗವನ್ನು )
ಓರ್ವ  ಮಧ್ವಮುನಿ  ತೋರ್ದ  ಸುಜನರ್ಗೆ
(ಸರ್ವ  ಸುಜನರಿಗೆ  ಅರುಹಿದನು  ಮೋದದಿ ) || ೨೪ ॥


ಸರ್ವೇಶ  ಹರಿ , ವಿಶ್ವ  ಎಲ್ಲ  ತಾ  ಪುಸಿಯೆಂಬ
ದುರ್ವಾದಿಗಳ  ಮತವ  ನೆರೆ  ಖಂಡಿಸಿ
ಸರ್ವೇಶ  ಹರಿ , ವಿಶ್ವ  ಸತ್ಯವೆನ್ದರುಹಿದ
ಶರ್ವಾದಿಗೀರ್ವಣ  ಸಂತತಿಯಲಿ  || ೨೫ ||


ಏಕವಿಮ್ಶತಿ  ಕುಭಾಷ್ಯಗಳ  ಬೇರನು  ತರಿದು
ಶ್ರೀಕರಾರ್ಚಿತನೊಲುಮೆ  ಶಾಸ್ತ್ರ  ರಚಿಸಿ
ಲೋಕತ್ರಯದೊಳಿದ್ದ  ಸುರರು  ಅಳಿಸುವಂತೆ
ಆ  ಕಮಲನಾಭಯತಿ  ನಿಕರಗೊರೆದ  || ೨೬ ॥

ಬದರಿಕಾಶ್ರಮಕೆ  ಪುನರಪಿಯಿಡಿ  ವ್ಯಾಸಮುನಿ
ಪದಕೆರಾಗಿ  ಅಖಿಲ  ವೆದಾರ್ಥಗಳನು
ಪದುಮನಾಭನ  ಮುಖದಿ  ತಿಳಿದು  ಬ್ರಹ್ಮತ್ವವೈಡಿದ
ಮಧ್ವಮುನಿರಾಯಗಭಿವನ್ದಿಪೆ  || ೨೭ ॥

ಜಯ  ಜಯತು  ದುರ್ವಾದಿಮತತಿಮಿರ  ಮಾರ್ತಾಂಡ
ಜಯ  ಜಯತು  ವಾದಿಗಜಪಂಚಾನನ
ಜಯ  ಜಯತು  ಚಾರ್ವಾಕಗರ್ವಪರ್ವತ  ಕುಲಿಶ
ಜಯ  ಜಯತು  ಜಗನ್ನಾಥ  ಮದ್ವನಾಥ  || ೨೮ ॥

ತುಂಗಕುಳಗುರುವರಣ  ಹ್ರುತ್ಕಮಲದೊಳು  ನೆಲೆಸಿ
ಭಂಗವಿಲ್ಲದ  ಸುಖವ  ಸುಜನಕೆಲ್ಲ
ಹಿಂಗದೆ  ಕೊಡುವ  ಗುರು  ಮಧ್ವಾನ್ತರಾತ್ಮಕ
ರಂಗವಿಠ್ಠಲನೆನ್ದು  ನೆರೆ  ಸಾರಿರೈ  || ೨೯ ॥



ಜಗನ್ನಾಥದಾಸರ  ಫಲ  ಸ್ತುತಿ
==========================


ಸೋಮಸೂರ್ಯೋಪರಾಗದಿ  ಗೋ  ಸಹಸ್ರಗಳ
ಭೂಮಿದೇವರಿಗೆ  ಸುರನದಿಯ  ತಟದಿ
ಶ್ರೀ  ಮುಕುನ್ದಾರ್ಪಣವೆನುತ  ಕೊಟ್ಟ  ಫಲಮಕ್ಕು
ಈ  ಮಧ್ವನಾಮ  ಬರೆದೋದಿದರ್ಗೆ  || ೩೦  ||

ಪುತ್ರರಿಲ್ಲದವರು  ಸತ್ಪುತ್ರರೈದುವರು
ಸರ್ವತ್ರದಲಿ  ದಿಗ್ವಿಜಯವಹುದು  ಸಕಲ
ಶತ್ರುಗಳು  ಕೆಡುವರು  ಅಪಮೃತ್ಯು  ಬರಳನ್ಜುವುದು
ಸೂತ್ರನಾಮಕನ  ಸಂಸ್ತುತಿ  ಮಾತ್ರದಿ  || ೩೧  ||

ಶ್ರೀಪಾದರಾಜ  ಪೆಳಿದ  ಮಧ್ವನಾಮ
ಸಂತಾಪ  ಕಳೆದಖಿಳಸೊಉಖ್ಯವನೀವುದು
ಶ್ರೀಪತಿ  ಶ್ರೀ  ಜಗನ್ನಾಥವಿಠ್ಠಲನ   ತೋರಿ  ಭಾವ
ಕೂಪಾರದಿನ್ದ  ಕಡೆಹಾಯಿಸುವುದು  || ೩೨ ॥


ಶ್ರೀ ಕೃಷ್ಣಾರ್ಪಣ ಮಸ್ತು ||


-ಶ್ರೀಪಾದರಜರು  

ಮದ್ವಾನಾಮವನ್ನು  ಇಲ್ಲಿ ಕೇಳಿರಿ :  http://www.youtube.com/watch?v=S6N5-ieYT84