Thursday, August 22, 2013

ಮಧ್ವನಾಮ 
========== 

ಮಧ್ವನಾಮ ಹೆಸರಾಂತ ಶ್ರೀಪಾದರಾಜರ ರಚನೆ . ಈ ಸ್ತುತಿಯು ಕನ್ನಡದಲ್ಲಿದ್ದು , ವಾಯು ದೇವರು ಹಾಗು ಅವರ ಮೂರು ಅವತಾರ ಹನುಮ-ಮದ್ವ-ಭೀಮ ರನ್ನು ಕೊಂಡಾಡಲಾಗಿದೆ. 




ಜಯ ಜಯ ಜಗತ್ರಾಣ, ಜಗದೊಳಗೆ ಸುತ್ರಾಣ
ಅಖಿಲ ಗುಣ ಸಧ್ಧಾಮ  ಮಧ್ವನಾಮ ... 



ಆವಾ ಕಚ್ಛಪರೂಪದಿಂದ  ಲಂಡೋದಕವ
ಓವಿ  ಧರಿಸಿದ  ಶೇಷಮೂರುತಿಯನು
ಆವವನ  ಬಳಿವಿಡಿದು  ಹರಿಯ  ಸುರರೈದುವರೋ
ಆ  ವಾಯು  ನಮ್ಮ  ಕುಲ  ಗುರುರಾಯನು|| ೧  ||

 
ಅವವನು  ದೇಹದೊಳಗಿರಲು  ಹರಿ  ನೆಲೆಸಿಹನು 
ಅವವನು  ತೊಲಗೆ  ಹರಿ  ತಾ ತೊಲಗುವ
ಅವವನು  ದೇಹದ  ಒಳ ಹೊರಗೆ   ನಿಯಾಮಕನು 
ಆ  ವಾಯು  ನಮ್ಮ  ಕುಲ  ಗುರು ರಾಯನು   || ೨ ||


ಕರಣಾಭಿಮಾನಿ  ಸುರರು   ದೇಹವ  ಬಿಡಲು
ಕುರುಡ  ಕಿವುಡ  ಮೂಕನೆನ್ದೆನಿಸುವ
ಪರಮ  ಮುಖ್ಯಪ್ರಾಣ  ತೊಲಗಲಾ  ದೇಹವನು
ಅರಿತು  ಪೆಣನೆಂದು  ಪೇಳ್ವರು  ಬುಧಜನ  ||  ೩ ||


ಸುರರೊಳಗೆ  ನರರೊಳಗೆ  ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ   (ನಿಯಮಿಸಿ) ನೆಲೆಸಿಹ
ಹರಿಯನಲ್ಲದೆ  ಬಗೆಯ ಅನ್ನ್ಯರನು    ಲೋಕದೊಳು
ಗುರುಕುಳತಿಲಕ  ಮುಖ್ಯ  ಪವಮಾನನು ||೪ ||



ಹನುಮಂತ  ಅವತಾರ
=================
ತ್ರೇತೆಯಲಿ  ರಘುಪತಿಯ  ಸೇವೆ   ಮಾಡುವೆನೆಂದು
ವಾತಸುತ  ಹನುಮಂತನೆನ್ದೆನಿಸಿದ
ಪೋತಭಾವದಿ  ತರಣಿಬಿಮ್ಬಕೆ   ಲಂಘಿಸಿದ
ಈತಗೆಣೆ  ಯಾರು  ಮೂರ್ಲೋಕದೊಳಗೆ  || ೫  ||  


ತರಣಿಗಭಿಮುಖವಾಗಿ  ಶಬ್ದಶಾಸ್ತ್ರವ  ಪಠಿಸಿ
ಉರವಣಿಸಿ  ಹಿನ್ದುಮುನ್ದಾಗಿ  ನಡೆದ
ಪರಮ  ಪವಮಾನ ಸುತ   ಉದಯಾಸ್ತ  ಶೈಲಗಳಾ
ಭಾರದಿ  ಐದಿದ  ಏತಗುಪಮೆಯುಂಟೇ  || ೬ ||


ಅಖಿಲ  ವೇದಗಳ  ಸಾರವ   ಪಠಿಸಿದನು  ಮುನ್ನಲ್ಲಿ
ನಿಖಿಲ  ವ್ಯಾಕರಣಗಳ  ಇವ  ಪೇಳಿದ
ಮುಖದಲ್ಲಿ  ಕಿಂಚಿದಪಶಬ್ದ  ಇವಗಿಲ್ಲೇನ್ದು
ಮುಖ್ಯಪ್ರಾಣನನು  ರಾಮನನುಕರಿಸಿದ  || ೭ ||


ತರಣಿಸುತನನು  ಕಾಯ್ದ  ಶರಧಿಯನು  ನೆರೆದಾಟಿ
ಧರಣಿಸುತೆಯಳ  ಕಂಡು  ದನುಜರೊಡನೆ
ಭರದಿ  ರಣವನೆಮಾಡಿ  ಗೆಲಿದು  ದಿವ್ಯಾಸ್ತ್ರಗಳ
ಉರುಹಿ  ಲಂಕೆಯ  ಬಂದ   ಹನುಮಂತನು  || ೮ ||


ಹರಿಗೆ  ಚೂಡಾಮಣಿಯನಿತ್ತು  ಹರಿಗಳ  ಕೂಡಿ
ಶರಧಿಯನು  ಕಟ್ಟಿ   ಬಹು  ರಕ್ಕಸರನು
ಒರಿಸಿ  ರಣದಲಿ  ದಶಶಿರಣ  ಹುಡಿಗುಟ್ಟಿ  ತಾ
ಮೆರೆದ  ಹನುಮಂತ  ಬಲವಂತ  ಧೀರ  || ೯ ||


ಉರಗಬನ್ಧಕೆ  ಸಿಲುಕಿ  ಕಪಿವರರು  ಮೈ  ಮರೆಯೆ
ತರಣಿಕುಲತಿಲಕನಾಗ್ನೆಯನೆ  ತಾಳಿದ
ಗಿರಿಸಹಿತ  ಸಂಜೀವನವ  ಕಿತ್ತು  ತಂದಿಟ್ಟ
ಹರಿವರಗೆ  ಸರಿಯುಂಟೆ  ಹನುಮಂತಗೆ  || ೧೦  ||


ವಿಜಯ  ರಘುಪತಿ  ಮೆಚ್ಚಿ  ಧರಣಿಸುತೆಯಳಿಗೀಯೆ
ಭಜಿಸಿ  ಮೌಕ್ತಿಕದ  ಹಾರವನು  ಪಡೆದ
ಅಜಪದವಿಯನು  ರಾಮ  ಕೊಡುವೆನೆನೆ  ಹನುಮಂತ
ನಿಜಭಾಕುತಿಯನೆ  ಬೇಡಿ  ವರವ  ಪಡೆದ  || ೧೧ ||



ಭೀಮ  ಅವತಾರ
=================


ಆ  ಮಾರುತನೆ  ಭೀಮನೆನಿಸಿ  ದ್ವಾಪರದಿ
ಸೋಮಕುಲದಲ್ಲಿ  ಜನಿಸಿ  ಪಾರ್ಥರೊಡನೆ
ಭೀಮವಿಕ್ರಮ  ರಕ್ಕಸರ  ಮುರಿದೊಟ್ಟಿದ
ಆ  ಮಹಿಮಾ  ನಮ್ಮ  ಕುಲ ಗುರುರಾಯನು   || ೧೨ ||


ಕರದಿಂದ   ಶಿಶುಭಾವನಾದ  ಭೀಮನ  ಬಿಡಲು
ಗಿರಿಯೊಡೆದು  ಶತಶ್ರುನ್ಗವೆನ್ದೆನೆಸಿತು
ಹರಿಗಳ  ಹರಿಗಳಿಮ್  ಕರಿಗಳ  ಕರಿಗಳಿಮ್
ಅರೆವ  ವೀರನಿಗೆ  ಸುರಾ  ನರರು  ಸರಿಯೇ  || ೧೩ ||


ಕುರುಪ  ಗರಳವನಿಕ್ಕೆ  ನೆರೆಯುಂಡು  ತೇಗಿ
ಉರಗಗಳ  ಮೇಲ್ಬಿಡಲು  ಅದನೋರಸಿದ
ಅರಗಿನ  ಮನೆಯಲ್ಲಿ  ಉರಿಯನಿಕ್ಕಳು  ಧೀರ
ಧರಿಸಿ  ಜಾಹ್ನವೀಗೊಯ್ದ  ತನ್ನನುಜರ  || ೧೪ ||


ಅಲ್ಲಿದ್ದ  ಬಕ  ಹಿಡಿಮ್ಬಕರೆಂಬ   ರಕ್ಕಸರ
ನಿಲ್ಲದೊರಿಸಿದ  ಲೋಕಕಂಟಕರನು
ಬಲ್ಲಿದಸುರರ  ಗೆಲಿದು  ದ್ರೌಪದಿ  ಕರವಿಡಿದು
ಎಲ್ಲ  ಸುಜನರಿಗೆ  ಹರುಷವ  ಬೀರಿದ  || ೧೫  ||


ರಾಜಕುಲ  ವಜ್ರನೆನಿಸಿದ  ಮಾಗಧನ  ಸೀಳಿ
ರಾಜಸೂಯಯಾಗವನು  ಮಾಡಿಸಿದನು
ಆಜಿಯೊಳು  ಕೌರವರ  ಬಲವಾ  ಸವರುವೆನೆಂದು
ಮೂಜಗವರಿಯೆ  ಕಂಕಣಕಟ್ಟಿದ  || ೧೬ ॥

 
ದಾನವರ  ಸವರಬೇಕೆನ್ದು  ಬ್ಯಾಗ (ಬೇಗ )
ಮಾನನಿಧಿ  ದ್ರೌಪದಿಯ  ಮನದಿಂಗಿತವನರಿತು
ಕಾನನವ  ಪೊಕ್ಕು  ಕಿಮ್ಮೀರಾದಿಗಳ  ಮುರಿದು 
ಮಾನಿನಿಗೆ  ಸೌಗಂಧಿಕವನೆ   ತಂದ  || ೧೭ ॥


ದುರುಳ  ಕೀಚಕನು  ದ್ರೌಪದಿಯ  ಚೆಳುವಿಕೆಗೆ
ಮರುಳಾಗಿ  ಕರಕರಿಯ  ಮಾಡಲವನಾ
ಗರಡಿಮನೆಯೊಳು  ಬರಸಿ  ಒರಿಸಿ   ಅವನನ್ವಯವ
ಕುರುಪನಟ್ಟಿದ  ಮಲ್ಲಕುಲವ  ಸವರಿದ  || ೧೮ ॥


ಕೌರವರ  ಬಲ  ಸವರಿ  ವೈರಿಗಳ  ನೆಗ್ಗೊತ್ತಿ
ಓರಂತೆ   ಕೌರವನ  ಮುರಿದು  ಮೆರೆದ
ವೈರಿ  ದುಶ್ಯಾಸನನ  ರಣದಲಿ  ಎಡೆಗೆಡೆಹಿ(ತೊಡೆಯ ಲಡ್ಡಗೆಡಹಿ)
ವೀರನರಹರಿಯ  ಲೀಲೆಯ  ತೋರಿದ  || ೧೯॥


ಗುರುಸುತನು  ಸಂಗರದಿ  ನಾರಾಯಣಾಸ್ತ್ರವನು
ಉರವಣಿಸಿ  ಬಿಡಲು  ಶಸ್ತ್ರವ   ಬಿಸುಟರು
ಹರಿಕೃಉಪೆಯ  ಪಡೆದಿರ್ದ  ಭೀಮ  ಹುಂಕಾರದಲಿ
ಹರಿಯ  ದಿವ್ಯಾಸ್ತ್ರವನು  ನೆರೆ  ಅಟ್ಟಿದ  || ೨೦ ॥ 


ಚಂಡವಿಕ್ರಮ  ಗದೆಗೊಂಡು  ರಣದೊಳಗೆ  ಭೂ
ಮಂಡಲದೊಳಿದಿರಾದನ್ತ  ಖಳರನೆಲ್ಲ
ಹಿಂಡಿ  ಬಿಸುಟಿದ  ವ್ರುಕೋದರನ  ಅತಾಪವನು
ಕಂಡು  ನಿಲ್ಲುವರಾರು  ತ್ರಿಭುವನದೊಳು || ೨೧॥


ನಾರಿರೋದನ  ಕೇಳಿ  ಮನಮರುಗಿ  ಗುರುಸುತನ
ಹಾರ್ಹಿಡಿದು  ಶಿರೋರತ್ನ  ಕಿಟ್ಟಿ  ತೆಗೆದ
ನೀರೊಳಡಗಿದ್ದ  ದುರ್ಯೋಧನನ  ಹೊರಗೆಡಹಿ
ಉರುಯುಗ  ತನ್ನ  ಗದೆಯಿಂದ  ಮುರಿದ  || ೨೨ ||



ಮಧ್ವ  ಅವತಾರ 
 =================

ದಾನವರು  ಕಲಿಯುಗದೊಳವತರಿಸಿ  ವಿಭುದರೊಳು
ವೇನನ  ಮತವನರುಹಳದನರಿತು
ಗ್ಯಾನಿ  ತಾ  ಪವಮಾನ  ಭೂತಳದೊಳವತರಿಸಿ
ಮಾನನಿಧಿ  ಮಧ್ವಾಖ್ಯನೆನ್ದೆನಿಸಿದ  || ೨೩ ॥


ಅರ್ಭಕತನದೊಳೈದಿ  ಬದರಿಯಲಿ  ಮಧ್ವಮುನಿ
ನಿರ್ಭಯದಿ  ಸಕಲ  ಶಾಸ್ತ್ರಗಳ  ಪಠಿಸಿದ
ಉರ್ವಿಯೊಳು  ಮಾಯೆ  ಬೀರಲು  ತತ್ವಮಾರ್ಗವನು
(ಉರ್ವಿಯೊಳು  ಆಮ್ನಾಯ  ತತ್ವದ  ಮಾರ್ಗವನ್ನು )
ಓರ್ವ  ಮಧ್ವಮುನಿ  ತೋರ್ದ  ಸುಜನರ್ಗೆ
(ಸರ್ವ  ಸುಜನರಿಗೆ  ಅರುಹಿದನು  ಮೋದದಿ ) || ೨೪ ॥


ಸರ್ವೇಶ  ಹರಿ , ವಿಶ್ವ  ಎಲ್ಲ  ತಾ  ಪುಸಿಯೆಂಬ
ದುರ್ವಾದಿಗಳ  ಮತವ  ನೆರೆ  ಖಂಡಿಸಿ
ಸರ್ವೇಶ  ಹರಿ , ವಿಶ್ವ  ಸತ್ಯವೆನ್ದರುಹಿದ
ಶರ್ವಾದಿಗೀರ್ವಣ  ಸಂತತಿಯಲಿ  || ೨೫ ||


ಏಕವಿಮ್ಶತಿ  ಕುಭಾಷ್ಯಗಳ  ಬೇರನು  ತರಿದು
ಶ್ರೀಕರಾರ್ಚಿತನೊಲುಮೆ  ಶಾಸ್ತ್ರ  ರಚಿಸಿ
ಲೋಕತ್ರಯದೊಳಿದ್ದ  ಸುರರು  ಅಳಿಸುವಂತೆ
ಆ  ಕಮಲನಾಭಯತಿ  ನಿಕರಗೊರೆದ  || ೨೬ ॥

ಬದರಿಕಾಶ್ರಮಕೆ  ಪುನರಪಿಯಿಡಿ  ವ್ಯಾಸಮುನಿ
ಪದಕೆರಾಗಿ  ಅಖಿಲ  ವೆದಾರ್ಥಗಳನು
ಪದುಮನಾಭನ  ಮುಖದಿ  ತಿಳಿದು  ಬ್ರಹ್ಮತ್ವವೈಡಿದ
ಮಧ್ವಮುನಿರಾಯಗಭಿವನ್ದಿಪೆ  || ೨೭ ॥

ಜಯ  ಜಯತು  ದುರ್ವಾದಿಮತತಿಮಿರ  ಮಾರ್ತಾಂಡ
ಜಯ  ಜಯತು  ವಾದಿಗಜಪಂಚಾನನ
ಜಯ  ಜಯತು  ಚಾರ್ವಾಕಗರ್ವಪರ್ವತ  ಕುಲಿಶ
ಜಯ  ಜಯತು  ಜಗನ್ನಾಥ  ಮದ್ವನಾಥ  || ೨೮ ॥

ತುಂಗಕುಳಗುರುವರಣ  ಹ್ರುತ್ಕಮಲದೊಳು  ನೆಲೆಸಿ
ಭಂಗವಿಲ್ಲದ  ಸುಖವ  ಸುಜನಕೆಲ್ಲ
ಹಿಂಗದೆ  ಕೊಡುವ  ಗುರು  ಮಧ್ವಾನ್ತರಾತ್ಮಕ
ರಂಗವಿಠ್ಠಲನೆನ್ದು  ನೆರೆ  ಸಾರಿರೈ  || ೨೯ ॥



ಜಗನ್ನಾಥದಾಸರ  ಫಲ  ಸ್ತುತಿ
==========================


ಸೋಮಸೂರ್ಯೋಪರಾಗದಿ  ಗೋ  ಸಹಸ್ರಗಳ
ಭೂಮಿದೇವರಿಗೆ  ಸುರನದಿಯ  ತಟದಿ
ಶ್ರೀ  ಮುಕುನ್ದಾರ್ಪಣವೆನುತ  ಕೊಟ್ಟ  ಫಲಮಕ್ಕು
ಈ  ಮಧ್ವನಾಮ  ಬರೆದೋದಿದರ್ಗೆ  || ೩೦  ||

ಪುತ್ರರಿಲ್ಲದವರು  ಸತ್ಪುತ್ರರೈದುವರು
ಸರ್ವತ್ರದಲಿ  ದಿಗ್ವಿಜಯವಹುದು  ಸಕಲ
ಶತ್ರುಗಳು  ಕೆಡುವರು  ಅಪಮೃತ್ಯು  ಬರಳನ್ಜುವುದು
ಸೂತ್ರನಾಮಕನ  ಸಂಸ್ತುತಿ  ಮಾತ್ರದಿ  || ೩೧  ||

ಶ್ರೀಪಾದರಾಜ  ಪೆಳಿದ  ಮಧ್ವನಾಮ
ಸಂತಾಪ  ಕಳೆದಖಿಳಸೊಉಖ್ಯವನೀವುದು
ಶ್ರೀಪತಿ  ಶ್ರೀ  ಜಗನ್ನಾಥವಿಠ್ಠಲನ   ತೋರಿ  ಭಾವ
ಕೂಪಾರದಿನ್ದ  ಕಡೆಹಾಯಿಸುವುದು  || ೩೨ ॥


ಶ್ರೀ ಕೃಷ್ಣಾರ್ಪಣ ಮಸ್ತು ||


-ಶ್ರೀಪಾದರಜರು  

ಮದ್ವಾನಾಮವನ್ನು  ಇಲ್ಲಿ ಕೇಳಿರಿ :  http://www.youtube.com/watch?v=S6N5-ieYT84

 

No comments:

Post a Comment