Tuesday, August 27, 2013

ನಿಜವಾದ ಸುಖ

 



ನಾವೆಲ್ಲರೂ ಕೃಷ್ಣನಲಿ ಭಕ್ತಿ ತೋರಿದಾಗ ಅವನನ್ನು ಪೋಷಿಸುತ್ತೇವೆ . ಅಂತವರನ್ನು ಕೃಷ್ಣ ರಕ್ಷಿಸುತ್ತಾನೆ . ಭಗವದ್ಗೀತೆಯಲ್ಲಿ  ಹೇಳಿರುವಂತೆ ,ಪ್ರತಿ ಜೀವಿಗೂ ಕೃಷ್ಣನು ನಿಜವಾದ ಗೆಳೆಯ . ಈ ಗೆಳೆತನದ ಪುರರ್ಚೆತನಕ್ಕೆ ಕೃಷ್ಣ ಪ್ರಜ್ಞೆಯು ಒಂದು ದಾರಿ .

 ಕೃಷ್ಣ ಪ್ರಜ್ಞೆಯ ಹಾದಿಯಲ್ಲಿ ಮುನ್ನಡೆದಾಗ ಆಧ್ಯಾತ್ಮಿಕ ಸುಖವನ್ನು ಸವಿಯಬಹುದು. ನಿಜವಾದ ಸುಖದ ನೆಲೆಯು ಕ್ಷಣಿಕ ವಸ್ತುಗಳನ್ನು ಮೀರಿದ್ದು ಎನ್ನುವುದು ಬಹು ಜನ ಅರಿಯರು. ಇಂತಹ ನಿಜವಾದ ಸುಖವನ್ನು ನಮ್ಮ ಪ್ರಿಯ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ವರ್ಣಿಸಿ ಹೇಳಿದ್ದಾನೆ .  

 ಆಧ್ಯಾತ್ಮಿಕ ಕಿಡಿಯು ನಿರಾಕಾರವಲ್ಲ . ಅದು ವಾಸ್ತವವಾಗಿಯೂ ಒಬ್ಬ ವ್ಯಕ್ತಿ . ಆಧ್ಯಾತ್ಮಿಕ ಕಿಡಿಯಿಲ್ಲದೆ ದೇಹವು ಸುಖದ ಭಾವವನ್ನು ಅನುಭವಿಸಲಾರದು . ದೇಹವು ಸುಖಿಸುವುದು ಆತ್ಮದಿಂದಲಿ . ಯಾವ ವ್ಯಕ್ತಿಯ ಆತ್ಮ ಅನಿಯಮಿತ   ದಿವ್ಯ ಸುಖವನು ಅನುಭವಿಸುತ್ತಾನೋ  ಅಂತವನು ಸತ್ಯದ ಮಾರ್ಗ ಬಿಟ್ಟು ಅತ್ತಿತ್ತ ಚಲಿಸುವುದಿಲ್ಲ . ಇಂತಹ ಆಧ್ಯಾತ್ಮ ಸುಖವನ್ನು ಪ್ರತಿಯೊಬ್ಬನು ಸವಿಯಬೇಕು. 

  
ಹಾಗೆಯೇ ಕೃಷ್ಣ ಪ್ರಜ್ಞೆಯ ಸ್ಥಾನದಲ್ಲಿ ಸ್ಥಿರನಾದಾಗ ವ್ಯಕ್ತಿಯು ಎಂತಹ ಆಪತ್ತಿನ ನಡುವೆಯೂ ವಿಚಲಿತನಾಗುವುದಿಲ್ಲ. ಕೃಷ್ಣ ಪ್ರಜ್ಞೆಯಲ್ಲಿ ಇರಲು ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು . ಅದಕ್ಕಾಗಿ ಯೋಗ ಪ್ರಕ್ರಿಯೆ ಉಂಟು . ಹಾಗೆಯೇ ನಮ್ಮ ಮನಸ್ಸು ಯಾವಾಗ ಕೃಷ್ಣ ಮಂತ್ರವನ್ನು ಜಪಿಸ್ಸುವಲ್ಲಿ ತೊಡಗುತ್ತದೋ , ಆಗ ಮನಸ್ಸು ನಮ್ಮ ಹತೋಟಿಗೆ ಬರುತ್ತದೆ . 

ಭಗವದ್ಗೀತೆ ೬.೨೭ ರಲ್ಲಿ  ಕೃಷ್ಣನು ಯಾವ ಯೋಗಿಯು ನನ್ನಲ್ಲಿ ಮನಸನ್ನು ನೆಲೆಗೊಳಿಸುತ್ತಾನೋ ಅಂತಹವನು ಅತ್ಯುನ್ನತ ಮಟ್ಟದ ಸುಖವನು ಗಳಿಸುತ್ತಾನೆ, ಅವನು ತನ್ನ ಮನಸ್ಸನ್ನು ಬ್ರಹ್ಮನ್ನೊಂದಿಗೆ ಸಮೇಕರಿಸಿಕೊಂಡದ್ದರ ಫಲವಾಗಿ ಅವನು ಮುಕ್ತ ,ಶಾಂತ ಮನಸ್ಕ ಮತ್ತು  ಅವನ ರಜೋಗುಣಗಳು ತಣ್ಣಗಾಗುತ್ತವೆ ಹಾಗು ಅವನು ಪಾಪ ಮುಕ್ತನಾಗುತ್ತನೆಂದು ಹೇಳಿದ್ದಾನೆ . 
ಅದಕ್ಕಾಗಿ ನಾವೆಲ್ಲರೂ ಕೃಷ್ಣನ ಸ್ತುತಿಸುತ್ತ ಅವನ ಗೆಳೆತನವನ್ನು ಆರದಿಸುತ್ತಾ ನಿಜವಾದ ಸುಖವನ್ನು ಅನುಭವಿಸೋಣ . 

।। ಶ್ರೀ ಕೃಷ್ಣಾರ್ಪಣ ಮಸ್ತು ।।

-ಸಹನ 

1 comment:

  1. well written Sahana.. A small typo is present..
    ಪುರರ್ಚೆತನಕ್ಕೆ should be punarchetanakke .. !!

    ReplyDelete